ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಹಸಿವು ಮುಂತಾಗಿ ಬಹಾತನ ಮನೆಯೊದವ ಬಲ್ಲನೆ?
ವಿಷಯವಾವರಿಸಿದಾತ ಸ್ತುತಿ ನಿಂದ್ಯಾದಿಗಳ ಬಲ್ಲನೆ?
ಖ್ಯಾತಿಯ ಲಾಭಕ್ಕೆ ಮಾಡುವಾತ ಭ್ರಾಂತಳಿದಿರಬಲ್ಲನೆ?
ಇಂತಿವನರಿದು ಮಾಡುವ ಭಕ್ತರು
ಆಪ್ಯಾಯನಕ್ಕೆ ಅನ್ನ ಅಶಕಂಗೆ ಹೊನ್ನು ವಿಷಯಾದಿಗೆ ಹೆಣ್ಣು
ಇಚ್ಛೆಯನರಿದು ಒದಗಿದಲ್ಲಿ ಕೊಟ್ಟು
ಈ ತ್ರಿವಧಕುಚಿತವೆಂದವರನರಿಯಬೇಕು.ಕಾಮಹರಪ್ರಿಯ ರಾಮನಾಥಾ.
-ತಳವಾರ ಕಾಮಿದೇವಯ್ಯ