ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಜಲದಲ್ಲಿ ಹುಟ್ಟಿದ ಚೇತನ, ಜಲವುಳಿದು ಜೀವಿಸಬಲ್ಲುದೆ ?
ಅರಿವನರಿದಲ್ಲಿ, ಕುರುಹಿನ ಮರೆಯಲ್ಲಿ,
ಇದೆಯೆಂದು ತೋರಿದ ಮತ್ತೆ ,
ಕುರುಹುನುಳಿದು, ಅರಿವ ಪರಿಯಿನ್ನೆಂತೊ ?
ಆ ಉಭಯ, ಆತ್ಮದೃಷ್ಟಿಯಂತೆ.
ಶಿವಲೆಂಕನ ಮಾತು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆಉಂಟು ಇಲ್ಲಾ ಎಂಬಲ್ಲಿ ಹಾಕಿದ ಮುಂಡಿಗೆ.
-ಶಿವಲೆಂಕ ಮಂಚಣ್ಣ