ವಚನ.: -ಸಿದ್ಧಾಂತಿ ವೀರಸಂಗಯ್ಯ.!
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ವಾರಿಯಿಂದಾದ ಮುತ್ತು ಶಾಂತಿಯ ಜಲದಲ್ಲಿ ಹಾಕಲಿಕಾಗಿ,
ಮುನ್ನಿನ ಎನ್ನಯ ವಾರಿ ಬಂದಿತ್ತೆಂದು ತಾ ಗಟ್ಟಿಗೊಂಡುದಿಲ್ಲ.
ಈ ಮುತ್ತು ತದ್ಭಾವ ಅಪ್ಪುವಿನಂತಾದುದಿಲ್ಲ.
ಈ ಉಭಯದ ಭೇದವ ತಿಳಿದಡೆ, ದ್ವೈತಾದ್ವೈತವ ಬಲ್ಲರೆಂಬೆ.
ಹೀಂಗಲ್ಲದೆ ಗೆಲ್ಲಸೋಲಕ್ಕೆ ಹೋರುವ ಕಲ್ಲೆದೆಯವರಿಗೆಲ್ಲಿಯದೊ,ಗೋಳಕಾಕಾರ ವಿಶ್ವವಿರಹಿತ ಲಿಂಗವು ಸಾಧ್ಯವಪ್ಪುದು ?
-ಸಿದ್ಧಾಂತಿ ವೀರಸಂಗಯ್ಯ