LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಕಾಂಗ್ರೆಸ್ ಪುನಶ್ಚೇತನ ಆಗುವ ಪರಿಸ್ಥಿತಿ ಶೂನ್ಯ: ಸಂಸದ ಗೋವಿಂದ ಕಾರಜೋಳ

ಕಾಂಗ್ರೆಸ್ ಪುನಶ್ಚೇತನ ಆಗುವ ಪರಿಸ್ಥಿತಿ ಶೂನ್ಯ: ಸಂಸದ ಗೋವಿಂದ ಕಾರಜೋಳ

 

ಚಿತ್ರದುರ್ಗ: ಕಾಂಗ್ರೆಸ್ ವೀಕ್ ಆಗಿ ಇಪ್ಪತ್ತು ವರ್ಷಗಳೇ ಆಗಿದೆ. ಕಾಂಗ್ರೆಸ್ ಪುನಶ್ಚೇತನ ಆಗುವ ಪರಿಸ್ಥಿತಿ ಇಲ್ಲ.ಕಾಂಗ್ರೆಸ್ ಪಕ್ಷ ನಾಯಕತ್ವದಿಂದ ಬಳಲುತ್ತಿದೆ. ಒಂದೆರಡು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಇದೆ. ಸತ್ತ ಪ್ರಾಣಿಯನ್ನು ರಣಹದ್ದು ತಿಂದಂತೆ ತಿನ್ನುತ್ತಿದ್ದಾರೆ. ಎಂದು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.

 ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾಜಿ ಸಚಿವರಾದ ಕೆ ಎನ್ ರಾಜಣ್ಣರವರ ಸಿದ್ಧರಾಮಯ್ಯ ವೀಕ್ ಆದರೆ ಕಾಂಗ್ರೆಸ್ ವೀಕ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ  ಮಾತನಾಡಿದ ಕಾರಜೋಳ ದೆಹಲಿ ಹಿಡಿದು ಬೆಂಗಳೂರು, ದೆಹಲಿ ಹಿಡಿದು ತೆಲಂಗಾಣವರೆಗೆ. ಕಾಂಗ್ರೆಸ್ ಇದೆ ಕಾಂಗ್ರೆಸ್ಗೆ ಉತ್ತಮ ಆಡಳಿತ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಸಾಧ್ಯವಿಲ್ಲ.ಸ್ವಜನ ಪಕ್ಷಪಾತದಿಂದ ಕಾಂಗ್ರೆಸ್ ಬಳಲುತ್ತಿದೆ. ಸೋನಿಯಾಗಾಂಧಿ ಮನೆ ಬಿಟ್ಟು ಹೊರಬರುವ ಸ್ಥಿತಿ ಕಾಂಗ್ರೆಸ್ ನಾಯಕರಿಗಿಲ್ಲ. ಪುನಃ ಅಧಿಕಾರಕ್ಕೆ ತರುವ ವಿಶ್ವಾಸ ಒಬ್ಬ ಕಾಂಗ್ರೆಸ್ ನಾಯಕರಲ್ಲೂ ಇಲ್ಲದಂಥಾಗಿದೆ ಎಂದು ಭವಿಷ್ಯ ನುಡಿದರು.

ವಂದೇ ಮಾತರಂ ಎರಡು ಚರಣ ಮಾತ್ರ ಹಾಡಬೇಕು ಅದನ್ನು ಮೀರಿದ ಅಧಿಕಾರಿಗಳನ್ನು ಅಮಾನತ್ತು ಮಾಸಲಾಗುವುದು ಎಂಬ ತಗಂಡಗಿರವರ ಹೇಳಿಕೆಗೆ ಪ್ರತಿಕ್ರಿಯಿಸಿ ಪೂರ್ಣ ವಂದೇ ಮಾತರಂ  ಹಾಡಲ್ಲ ಎಂಬುದು ಮೂರ್ಖತನ. ರಾಜ್ಯ, ಕೇಂದ್ರ ಸರ್ಕಾರ ಒಟ್ಟಿಗೆ ಹೋಗಬೇಕು. ಇಬ್ಬರು ಒಂದು ಬಂಡಿಯ ಎರಡು ಗಾಲಿಗಳಂತೆ ನಡೆಯಬೇಕು. ಒಕ್ಕೂಟ ವ್ಯವಸ್ಥೆ ಅಂದರೇನು ಅವರಿಗೆ ಗೊತ್ತಿಲ್ಲ. ಮಂತ್ರಿ ಎಂದು ಯಾವನೋ ಒಬ್ಬ ಬಾಯಿಗೆ ಬಂದಂತೆ ಮಾತಾಡಿದರೆ ಅರ್ಥವಿಲ್ಲ. ವಂದೇ ಮಾತರಂ ಒಪ್ಪಲ್ಲ ಅಂದವರು ಮುಂದೆ ರಾಷ್ಟ್ರಗೀತೆ ಒಪ್ಪಲ್ಲ ಅಂತೀರಿ. ರಿಸರ್ವ್ ಬ್ಯಾಂಕ್ ಕೇಂದ್ರ ಅಧೀನದಲ್ಲಿ ಇದೆ. ನಾವೇ ವಿಧಾನಸೌಧದಲ್ಲಿ ನೋಟ್ ಪ್ರಿಂಟ್ ಮಾಡುತ್ತೇವೆ ಅಂದರೆ ಮೂರ್ಖತನವಾಗುತ್ತದೆ.. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಓಲೈಕೆ ಮಾತು ಸರಿಯಲ್ಲ ಎಂದು ಸಂಸದರು ಟೀಕಿಸಿದರು.

ಮಂಗಳೂರಲ್ಲಿ ಸಚಿವ ಸಂಪುಟ ಸಭೆ ಒಂದು ಗಿಮಿಕ್. ನಿನ್ನೆ ಕಲಬುರಗಿಯಲ್ಲಿ 1800 ಕೋಟಿ ರೂ ಘೋಷಣೆ ಮಾಡಿದ್ದಾರೆ.. ಖಜಾನೆಯೇ ಖಾಲಿ ಇದೆ, ಎಲ್ಲಿಂದ ಕೊಡುತ್ತಾರೆ. ರಾಜ್ಯದಲ್ಲಿ ಬರಗಾಲ ತಾಂಡವ ಆಡುತ್ತಿದೆ... ಜಿಲ್ಲೆಗೆ 100 ಕೋಟಿ ರೂ ಬರ ನಿರ್ವಹಣೆಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಮೇಲ್ದಂಡೆ ಯೋಜನೆ: ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕ ನೀರು ಬಿಡುಗಡೆ.! ಜಿಲ್ಲಾಧಿಕಾರಿ ಎಸ್.ರಮ್ಯಾ.!ಫುಟ್ಬಾಲ್ ಪಂದ್ಯಾವಳಿ:  ಪ್ರಥಮ ಸ್ಥಾನ ಹಾಗೂ ಹಾಕಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನಭ್ರಷ್ಟ ಸರ್ಕಾರ ಕೆಳಗಿಳಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿದೆ: ಎಸ್.ಲಕ್ಷ್ಮಿಕಾಂತ್ಕಾಂಗ್ರೆಸ್ ಪುನಶ್ಚೇತನ ಆಗುವ ಪರಿಸ್ಥಿತಿ ಶೂನ್ಯ: ಸಂಸದ ಗೋವಿಂದ ಕಾರಜೋಳದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 19-09-2026--ಕಲಕೇತಯ್ಯ  ಅವರ ವಚನ.!ರೈತರಿಗೆ ಮುಖ್ಯಮಾಹಿತಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಹಣ ಪಡೆಯಲು ಇದು ಕಡ್ಡಾಯ.!ಕಣ್ಣಿಗೆ ಕಾಣದಂತಹ  ಗಾಳಿ ಮುಖಾಂತರ ನಕಾರಾತ್ಮಕ ಮಾಟ ಮಂತ್ರದ ದೋಷಗಳಿಗೆ ವಿಶೇಷ ಪರಿಹಾರ ತಿಳಿದುಕೊಳ್ಳಿUPI ಎಂಡಿಆರ್ ಶುಲ್ಕದ ವಿವಿರ: ಯಾರಿಗೆ ಎಷ್ಟು ಹೊರೆ.! ಇಲ್ಲ.!ಜನಾರ್ದನರೆಡ್ಡಿ ನನ್ನ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ: ಸಚಿವ ಶಿವರಾಜ್ ತಂಗಡಗಿ