-ಅಕ್ಕಮಹಾದೇವಿ ಅವರ ವಚನ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ತನುವಿಡಿದ ಇಂದ್ರಿಯಸುಖ
ಸಿರಿಯಂತೆ ತೋರಿ ಅಡಗುತ್ತಲಿದೆ.
ಗಗನದೊಡ್ಡಣೆಯಂತೆ ತನು ;
ನೋಡ ನೋಡಲನುಮಾನವಿಲ್ಲದೆ ಹರಿದು ಹೋಗುತ್ತದೆ.
ಇವಾದಿಯ ಮಾಣಿಸಿ, ನಿಮ್ಮ ಘನನೆನಹಿನೊಳಿರಿಸಾ ಚೆನ್ನಮಲ್ಲಿಕಾರ್ಜುನಯ್ಯಾ.
-ಅಕ್ಕಮಹಾದೇವಿ