ಬೆಂಗಳೂರು : ಸಿಡಿ ಲೇಡಿ ಸತತ ಎಸ್ ಐ ಟಿ ವಿಚಾರಣೆ ಎದುರಿಸುತ್ತಿರುವ ಬೆನ್ನಲ್ಲೆ ಸಾಹುಕಾರ್ ಐದನೇ ಬಾರಿ ನೋಟಿಸ್ ನೀಡಿದರು ವಿಚಾರಣೆಗೆ ಹಾಜರಾಗದಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಾರ್ಚ್ 29ಕ್ಕೆ ಕಾಣಿಸಿಕೊಂಡಿದ್ದ ಜಾರಕಿಹೊಳಿ ಮತ್ತೆ ಪತ್ತೆನೇ ಇಲ್ಲಾ. ಎಸ್.ಐ.ಟಿ ವಿಚಾರಣೆಗೂ ಬಾರದೆ, ವಕೀಲರ ಮೂಲಕ ಕಾಲಾವಕಾಶ ಕೇಳಿದ್ದಾರೆ.
ನಾನು ಭಾರತದ ಪ್ರಧಾನಿಯಾದರೆ ಮೊದಲು ಉದ್ಯೋಗ ಸೃಷ್ಟಿಯತ್ತ ಗಮನಹರಿಸುವೆ : ರಾಹುಲ್ ಗಾಂಧಿ
ಅನಾರೋಗ್ಯದ ಕಾರಣ ನೀಡುವ ಜಾರಕಿಹೊಳಿ ಸಿಡಿ ಲೇಡಿಯನ್ನು ಎದುರಿಸಲು ಆಗದೇ ಕುಂಟು ನೆಪ ಹೇಳಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಜನರು ಆಡಿಕೊಳ್ಳುವಂತಾಗಿದೆ.
ಅಜ್ಞಾತ ಸ್ಥಳದಲ್ಲೇ ಕೂತು ಬೆಳವಣಿಗೆ ಗಮನಿಸುತ್ತಿರುವ ರಮೇಶ್ ಜಾರಕಿಹೊಳಿ ಯುವತಿಯ ಎಲ್ಲಾ ಹೇಳಿಕೆಗಳನ್ನು ಗಮನಿಸುತ್ತಿರುವಂತೆ ಕಾಣಿಸುತ್ತಿದೆ. ಆಕೆಯ ಎಲ್ಲಾ ಹೇಳಿಕೆ ಮುಗಿದ ಬಳಿಕ ಕಾಣಿಸಿಕೊಳ್ಳುವ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.