ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಶುದ್ಧವೆ ಜವನಿಕೆಯಾಗಿ, ಸಿದ್ಧವೆ ಸಿಂಹಾಸನವಾಗಿ
ಪ್ರಸಿದ್ಧದ ಹೊದಿಕೆಯ ಹೊದ್ದು, ನಾನಾಡುತ್ತಿರ್ದೆ ಬಹುರೂಪ.
ಶುದ್ಧ ಓಡಿದಲ್ಲಿ, ಇದ್ದ ನಿಜ ನಾಸ್ತಿಯಾಯಿತ್ತೆನ್ನ ಬಹುರೂಪು.
ಸಿದ್ಧವೆಂಬ ಸಿಂಹಾಸನ ಅಳಿದಲ್ಲಿ
ಬುದ್ಧಿಗೆಟ್ಟಾಡುತ್ತಿದ್ದುದಯ್ಯಾ, ಎನ್ನ ಬಹುರೂಪು.
ಪ್ರಸಿದ್ಧ ಹೊದಿಕೆ ಹರಿದಲ್ಲಿ
ನಾ ಬಸವನ ಕೂಡೆ ಆಡುತ್ತಿರ್ದೆ ಕಾಣಾ.ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತೀ ಲೋಕವೆಲ್ಲಾ.
-ಬಹುರೂಪಿ ಚೌಡಯ್ಯ