By using this site, you agree to the Privacy Policy and Terms of Use.
Accept
BC SuddiBC Suddi
  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle
Search
  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle
© 2022 BC Suddi - All Rights Reserved | Powered by Kalahamsa Infotech Pvt. ltd.
Reading: ಲಖನೌದ ಹಜರತ್ಗಂಜ್ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು, 12 ಮಂದಿ ರಕ್ಷಣೆ.!
Share
Notification Show More
Latest News
ಬರಗೂರು ರಾಮಚಂದ್ರಪ್ಪ ಅಸ್ವಸ್ಥ.! ಚೇತರಿಕೆ.!
Karnataka State
ಮನೆಯಲ್ಲಿರುವ ದುಷ್ಟ ಶಕ್ತಿಗಳು ತಂತ್ರಶಕ್ತಿಗಳು ಹೊರಹೋಗಲಿಕ್ಕೆ ಸೋಮವಾರದ ದಿನ ಬಿಳಿ ಸಾಸಿವೆಯಿಂದ ಈ ತಂತ್ರ ಮಾಡಿ ಸಾಕು!
Karnataka State
-ದಾಸೋಹದ ಸಂಗಣ್ಣ ಅವರ ವಚನ
Karnataka State
ಹಾಸ್ಯ ನಟ ಮಂದೀಪ್ ರಾಯ್ ವಿಧಿವಶ.!
Karnataka State
ಮೂರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!
Karnataka State
Aa
BC SuddiBC Suddi
Aa
Search
  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle
Follow US
© 2022 Foxiz News Network. Ruby Design Company. All Rights Reserved.
BC Suddi > National News > ಲಖನೌದ ಹಜರತ್ಗಂಜ್ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು, 12 ಮಂದಿ ರಕ್ಷಣೆ.!
National News

ಲಖನೌದ ಹಜರತ್ಗಂಜ್ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು, 12 ಮಂದಿ ರಕ್ಷಣೆ.!

News Desk
Last updated: 2023/01/25 at 7:41 AM
News Desk
Share
SHARE

 

ಲಖನೌ: ಉತ್ತರ ಪ್ರದೇಶದಲ್ಲಿ ಲಖನೌದ ಹಜರತ್ಗಂಜ್ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಬಿದ್ದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಐದರಿಂದ ಏಳು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆಮ್ಲಜನಕ ಪೂರೈಕೆಗೂ ವ್ಯವಸ್ಥೆ ಮಾಡಲಾಗಿದೆ.

ಸೇನೆಯ ತಂಡ ಕೂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ 12 ಗಂಟೆಗಳ ಕಾಲ ಮುಂದುವರಿಯಲಿದೆ ಎಂದು ಡಿಜಿಪಿ ಡಿ.ಎಸ್. ಚೌಹಾನ್ ಮಾಹಿತಿ ನೀಡಿದ್ದಾರೆ.

ಈವರೆಗೆ 12 ಮಂದಿಯನ್ನು ರಕ್ಷಿಸಲಾಗಿದೆ. ಇದು ಸಂಯಮ ಕಾಪಾಡುವ ಸಮಯ. ವೈಜ್ಞಾನಿಕವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಎಲ್ಲರನ್ನು ರಕ್ಷಿಸುವ ನಂಬಿಕೆ ಇದೆ ಎಂದು ಅವರು ಹೇಳಿದರು.

ಕಟ್ಟಡ ಕುಸಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತಜ್ಞರ ಹಾಗೂ ಪೊಲೀಸರ ತನಿಖೆಯ ಬಳಿಕವಷ್ಟೇ ಈ ಬಗ್ಗೆ ತಿಳಿದು ಬರಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಸಹ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಣಾ ಕಾರ್ಯಾಚರಣೆಗೆ ಮೇಲ್ನೋಟ ವಹಿಸುತ್ತಿದ್ದು, ಸೇನಾ ತಂಡ ಸಹ ಆಗಮಿಸಿದೆ ಎಂದು ಜಿಲ್ಲಾಧಿಕಾರಿ ಸೂರ್ಯಪಾಲ್ ಗಂಗಾವರ್ ಹೇಳಿದರು.

ಮಂಗಳವಾರ ಸಂಭವಿಸಿದ ಭೂಕಂಪದಿಂದಾಗಿ ಕಟ್ಟಡ ಕುಸಿದಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗ ಕಾರಣಗಳ ಬಗ್ಗೆ ಚರ್ಚಿಸಲು ಸೂಕ್ತವಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದಷ್ಟೇ ತಿಳಿಸಿದರು.

ಈ ಮೊದಲು ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದರು. ಬಳಿಕ ತಮ್ಮ ಹೇಳಿಕೆ ಹಿಂಪಡೆದ ಅವರು, ಯಾರೂ ಕೂಡ ಮೃತಪಟ್ಟಿಲ್ಲ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

 

You Might Also Like

ಲಾರಿ ಡಿಕ್ಕಿಯಾಗಿ ಐವರು ಪಾದಚಾರಿಗಳ ಸಾವು!

ಎರಡು ವಿಮಾನಗಳು ಪತನ.!

ನನ್ನ ಆರೋಗ್ಯದ ಗುಟ್ಟು ನನ್ನ ಪತ್ನಿ.!

ವಿಡಿಯೋ ಅಪ್ಲೋಡ್ ಮಾಡಿದರೆ ಹಣ ಸಿಗುತ್ತೆ ಅಂತ ಈ ಬಿಟೆಕ್ ಹುಡುಗಿ:.!

News Desk 25/01/2023
Share this Article
Facebook Twitter Copy Link Print
Share
Previous Article ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರ ಮಳೆ ಆಗುವುದು ಈ ಜಿಲ್ಲೆಗಳಲ್ಲಿ ..!
Next Article ದ್ವಿಚಕ್ರ ವಾಹನ ಸವಾರರು ಅರ್ಧ ಹೆಲ್ಮೆಟ್ ಗಳನ್ನು ದರಿಸಿದ್ರೆ ದಂಡ ಗ್ಯಾರಂಟಿ.!

Latest News

ಬರಗೂರು ರಾಮಚಂದ್ರಪ್ಪ ಅಸ್ವಸ್ಥ.! ಚೇತರಿಕೆ.!
ಮನೆಯಲ್ಲಿರುವ ದುಷ್ಟ ಶಕ್ತಿಗಳು ತಂತ್ರಶಕ್ತಿಗಳು ಹೊರಹೋಗಲಿಕ್ಕೆ ಸೋಮವಾರದ ದಿನ ಬಿಳಿ ಸಾಸಿವೆಯಿಂದ ಈ ತಂತ್ರ ಮಾಡಿ ಸಾಕು!
-ದಾಸೋಹದ ಸಂಗಣ್ಣ ಅವರ ವಚನ
ಹಾಸ್ಯ ನಟ ಮಂದೀಪ್ ರಾಯ್ ವಿಧಿವಶ.!
ಮೂರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!
ಲಾರಿ ಡಿಕ್ಕಿಯಾಗಿ ಐವರು ಪಾದಚಾರಿಗಳ ಸಾವು!

Stay Connected

248.1k Like
69.1k Follow
134k Pin
54.3k Follow

About us

www.bcsuddi.com is an Kannada web portal founded by Basavaraju C.

The website provides news updates, karnataka, india, world, sports, entertainment, business, lifestyle in
kannada language.

Email ID: bcsuddi@gmail.com

BC Suddi

The Best Ever Kannada News Website..!!!
Read all Breaking News, Latest News, Political News, Crime news, State News, Entertainment News, National, and International News, and News related to Law, Technology News in Kannada, especially on BC Suddi.
We are here to get all news around your Area and let you know about What is happening all over India and World.

Quick Link

  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle

Categories

  • Astrology
  • Business
  • Entertainment
  • Jobs
  • Karnataka State
  • Lifestyle
  • National News
  • Sports
  • Uncategorized
  • World News

Latest News

ಬರಗೂರು ರಾಮಚಂದ್ರಪ್ಪ ಅಸ್ವಸ್ಥ.! ಚೇತರಿಕೆ.!
ಮನೆಯಲ್ಲಿರುವ ದುಷ್ಟ ಶಕ್ತಿಗಳು ತಂತ್ರಶಕ್ತಿಗಳು ಹೊರಹೋಗಲಿಕ್ಕೆ ಸೋಮವಾರದ ದಿನ ಬಿಳಿ ಸಾಸಿವೆಯಿಂದ ಈ ತಂತ್ರ ಮಾಡಿ ಸಾಕು!
-ದಾಸೋಹದ ಸಂಗಣ್ಣ ಅವರ ವಚನ
BC SuddiBC Suddi
Follow US

© 2022 BC Suddi - All Rights Reserved.
Crafted By Kalahamsa Infotech Pvt.ltd

Join Us!

Subscribe to our newsletter and never miss our latest news, podcasts etc..

[mc4wp_form]
Zero spam, Unsubscribe at any time.

Removed from reading list

Undo
Welcome Back!

Sign in to your account

Lost your password?