ಚಿತ್ರದುರ್ಗ: ಜಿಲ್ಲಾ ರೇಷ್ಮೆ ಬೆಳೆಗಾರರು ಅಧಿಕ ಮತ್ತು ನಿಶ್ಚಿತ ಲಾಭ ತರುವಂತಹ ರೇಷ್ಮೆ ಕೃಷಿಮಾಡುತ್ತಿದ್ದಾರೆ. ಆದರೆ ೨೦೨೦ ರಲ್ಲಿ ಕೊರೊನ ಖಾಯಿಲೆ ಬಂದಿರುವುದರಿಂದ ೧ ಕೆ.ಜಿ ರೇಷ್ಮೆ ಗೂಡಿಗೆ ೩೫೦ ರೂಪಾಯಿ ಉತ್ಪಾದನಾ ವೆಚ್ಚವಾಗುತ್ತಿದ್ದು ಕೊರೊನ ಬಂದಾಗಿನಿಂದ ೧ ಕೆ.ಜಿ ರೇಷ್ಮೆ ಗೂಡಿನ ಬೆಲೆ ೧೦೦-೨೫೦ ರೂ.ಗಳಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು ಬಹಳ ನಷ್ಟ ಹೊಂದಿ ಬದುಕಲು ಬೇರೆ ದಾರಿಯಿಲ್ಲದೆ ಜಿಲ್ಲೆಯ ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
ಆದುದರಿಂದ ನಾವು ಬೆಳೆದ ರೇಷ್ಮೆ ಗೂಡಿಗೆ ದೇಶದ ಕೃಷಿ ತಜ್ಞ ಡಾ|| ಸ್ವಾಮಿನಾಥನ್ ರವರ ವರದಿಯ ಪ್ರಕಾರ ಗೂಡಿನ ಉತ್ಪಾದನಾ ವೆಚ್ಚ ೩೫೦ ರೂ.ಗಳಿಗೆ ಶೇ ೫೦ ರಷ್ಟು ಲಾಭಾಂಶ ಸೇರಿಸಿ ಕನಿಷ್ಟ ಬೆಂಬಲ ಬೆಲೆಯನ್ನು ಸರ್ಕಾರ ಕೂಡಲೇ ಘೋಷಣೆ ಮಾಡಬೇಕು ಎಂದು ರೈತರು ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ನೇಮಕ ಮಾಡಿದ್ದ ಡಾ|| ಹೆಚ್.ಬಸವರಾಜ್ ಸಮಿತಿಯ ಪ್ರಕಾರ ಅಂದಿನ ವರದಿಯನ್ನು ಇಂದು ಪರಿಷ್ಕರಣೆ ಮಾಡಿ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಕೊರೊನಾ ಬಂದಾಗಿನಿದ್ದು ಗೂಡು ಬೆಳೆದು ನಷ್ಟವಾಗಿರುವ ರೈತರಿಗೆ ಪರಿಸ್ಥಿತಿ ಸುಧಾರಿಸೋವರೆಗೂ ೧ ಕೆ.ಜಿ ಗೂಡಿಗೆ ಕನಿಷ್ಟ ೧೫೦ ರೂಪಾಯಿ ಪ್ರೋತ್ಸಾಹ ಧನವನ್ನು ಕೊಡಬೇಕೆಂದು ಚಿತ್ರದುರ್ಗ ಜಿಲ್ಲೆಯ ರೇಷ್ಮೆ ಬೆಳೆಗಾರರ ಮನವಿ ಪತ್ರದ ಮೂಲಕ ಸರಕಾರಕ್ಕೆ ಒತ್ತಾಯಿಸಿದರು.
No comments!
There are no comments yet, but you can be first to comment this article.