ಬೆ0ಗಳೂರು; ಮನೆಯ ಕೆಲಸದವನ ಜೊತೆ ಸೇರಿ ಮುದ್ದಿನ ಮಡದಿಯೇ ಗಂಡನನ್ನು ಕೊಲೆ ಮಾಡಿರುವ ವಿಚಿತ್ರ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ ಈ ಪ್ರಕರಣವನ್ನು ತಡವಾಗಿ ಭೇದಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬ0ಧಿತ ಆರೋಪಿಗಳನ್ನು ಬೆಂಗಳೂರು ಉತ್ತರದ ತೋಟದ ಗುಡ್ಡದಹಳ್ಳಿ ನಿವಾಸಿ ಶಿವಲಿಂಗಯ್ಯ ಎಂಬವರ ಪತ್ನಿ ಶೋಭಾ ಹಾಗೂ ಕೆಲಸದಾಳು ರಾಮ ಎಂದು ಗುರುತಿಸಲಾಗಿದೆ. ಆರೋಪಿಗಳು ಅಕ್ರಮ ಸಂಬAಧ ಹೊಂದಿದ್ದು, ಜೂನ್ 1 ರಂದು ಶಿವಲಿಂಗಯ್ಯನನ್ನು ಕೊಲೆ ಮಾಡಿ ಮೃತದೇಹವನ್ನು ಕಸದ ರಾಶಿಯಲ್ಲಿ ಹೂತ್ತಿಟ್ಟಿದ್ದರು. ಶಿವಲಿಂಗಯ್ಯ ಕಾಣದ್ದನ್ನು ಗಮನಿಸಿದ ಆತನ ಸಹೋದರ ನವೆಂಬರ್ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
No comments!
There are no comments yet, but you can be first to comment this article.