ನವದೆಹಲಿ : ದೆಹಲಿ ಸರ್ಕಾರ ಪಡಿತ ಚೀಟಿದಾರರಿಗೆ ಸಿಹಿಸುದ್ದಿ ನೀಡಿದ್ದು, ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದು, ಪಡಿತರ ಚೀಟಿದಾರರು ಇನ್ನುಮುಂದೆ ಪಡಿತರ ಪಡೆಯಲು ಪಡಿತರ ಅಂಗಡಿಗೆ ಬರುವು ಅಗತ್ಯವಿಲ್ಲ, ಬಡ ಜನರ ಮನೆ ಬಾಗಿಲಿಗೆ ಪೂರೈಸಲು ಸರ್ಕಾರ ನಿರ್ಧರಿಸಿದೆ.
ಕೊರೊನಾ ಸೋಂಕು ವ್ಯಾಪಕ ಹರಡುತ್ತಿರುವ ಹಿನ್ನೆಲೆ ಜನರ ಸುರಕ್ಷತೆ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇನ್ನೂ ಆರೇಳು ತಿಂಗಳಲ್ಲಿ ದೆಹಲಿಯಲ್ಲಿ ಬಡ ಜನರ ಮನೆ ಬಾಗಿಲಿಗೆ ಪಡಿತರ ಪೂರೈಸುವ ‘ಘರ್ ಘರ್ ರೇಷನ್‘ ಯೋಜನೆ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
No comments!
There are no comments yet, but you can be first to comment this article.