ಸಾಹಿತ್ಯ
ಬೆಂಗಳೂರು: “ಕನ್ನಡ ಭಾಷೆಯಲ್ಲಿರುವ ಸಹಜ ಅಲಂಕಾರವನ್ನು ಆಕರ್ಷಕವಾಗಿ ಜನರಿಗೆ ತಲುಪಿಸಿದಾಗ ಕನ್ನಡದ ಬೆಳವಣಿಗೆ ಸಾಧ್ಯ. ಲಂಕೇಶ್ ಅವರ ನಾಟಕ ಗದ್ಯ, ರವಿ ಬೆಳಗೆರೆ ಅವರ ಕನ್ನಡ ಸಾಹಿತ್ಯ, ಶಿವರಾಮ ಕಾರಂತರ ವಸ್ತು ವಿಷಯ, ಗಿರೀಶ ಕಾರ್ನಾಡರ ನಾಟಕದಂತೆ ಕನ್ನಡಿಗರಿಗೆ ಸಾಹಿತ್ಯವನ್ನು ಜನರಿಗೆ ಉಣಬಡಿಸಬೇಕು. ಈ ನಿಟ್ಟಿನಲ್ಲಿ ನವರಸಗಳನ್ನು ಎರಕಹೊಯ್ದು ಬರೆಯುವವರಲ್ಲಿ ಅಗ್ರಿಗರಾಗಿ ಜೋಗಿ ಅವರು ನಿಲ್ಲುತ್ತಾರೆ” ಎಂದು ನಿರ್ದೇಶಕ ಟಿ. ಎನ್. ಸೀತಾರಾಂ ಅವರು ಅಭಿಪ್ರಾಯಿಸಿದರು. ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜೋಗಿ ಅವರ ‘ಪುಚ್ಚೆ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಅವರು ಈ ಮಾತನ್ನು ಹೇಳಿದರು. ಬೆಂಗಳೂರಿಗೆ ವಲಸಿಗರಾಗಿ ಬರುವ ಸಾವಿರಾರು ಜನರಲ್ಲಿ
ಚಿನ್ನಮ್ಮನ ಲಗ್ನ, ಪತ್ಮಂದೆ; ಸೂಕ್ಷ್ಮ ಒಳನೋಟಗಳ ಸುಂದರ ಕೃತಿಗಳು: ಜೋಗಿ ಪ್ರಶಂಸೆ‘ಬುಕ್ ಬ್ರಹ್ಮ’ ಸಹಯೋಗದಲ್ಲಿ ಅಂಕಿತ ಪುಸ್ತಕವು ಫೇಸ್ ಬುಕ್ ಲೈವ್ ನಲ್ಲಿ ಭಾನುವಾರ ಬೆಳಗ್ಗೆ ಆಯೋಜಿಸಿದ್ದ ಸಮಾರಂಭದಲ್ಲಿ ಲೇಖಕ ಕೆ. ಸತ್ಯನಾರಾಯಣ ಅವರ ಪ್ರತಿಸ್ಪಂದಾತ್ಮಕ ಸ್ವರೂಪದ ಕೃತಿ ‘ಚಿನ್ನಮ್ಮನ ಲಗ್ನ-1893 ಹಾಗೂ ಅನು ಬೆಳ್ಳೆ ಅವರ ಪತ್ಮಂದೆ-ಕಾದಂಬರಿಯನ್ನು ಖ್ಯಾತ ಲೇಖಕ ಹಾಗೂ ಅಂಕಣಕಾರ ಜೋಗಿ ಅವರು ಬಿಡುಗಡೆ ಮಾಡಿದರು. ನಂತರ ಮಾತನಾಡಿ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಸೂಕ್ಷ್ಮ ಒಳನೋಟಗಳನ್ನು ಹೆಕ್ಕಿ ಆ ಕುರಿತ ಟಿಪ್ಪಣಿಗಳನ್ನು ಅಷ್ಟೇ ಸೂಕ್ಷ್ಮವಾಗಿ ದಾಖಲಿಸಿದ್ದು ಲೇಖಕರ ವಿದ್ವತ್ತಿಗೆ ಕನ್ನಡಿ ಹಿಡಿಯುತ್ತದೆ. ಮೂಲ ‘ಮಲೆಗಳಲ್ಲಿ ಮದುಮಗಳು ಕಾದಂಬರಿಯಷ್ಟೇ ಮನಸ್ಸಿಗೆ ಆಹ್ಲಾದ ನೀಡುವ
ಪಾರಂಪರಿಕ ಸಮಾಜಶಾಸ್ತ್ರಜ್ಞರಿಗಿಂತ ವಿಭಿನ್ನವಾದ ಲೋಕದೃಷ್ಟಿಯಲ್ಲಿ ಆಲೋಚಿಸುವ ಚಿಂತಕ GBರಲ್ಲಿ ಒಬ್ಬರಾದ ಡಾ.ಲಕ್ಷ್ಮೀಪತಿ ಅವರ ಅಂಬೇಡ್ಕರ್ ವಾದದ ಆಚರಣೆ ಎನ್ನುವ ಹೊಸ ಪುಸ್ತಕ ಬಿಡುಗಡೆಯಾಗುತ್ತಿದೆ.ಮೊದಲಿಗೆ ವಿಶಿಷ್ಟವಾದ ಕೃತಿ ನೀಡುತ್ತಿರುವ ಡಾ.ಲಕ್ಷ್ಮೀಪತಿ ಅವರಿಗೆ ಅಭಿನಂದನೆಗಳು. ಚರಿತ್ರೆಯುದ್ದಕ್ಕೂ ಮತ್ತು ಪ್ರಸ್ತುತ ಸಂದರ್ಭದಲ್ಲೂ ಶೋಷಕರ ಕಬಂಧ ಬಾಹುವಿನಲ್ಲಿ ಸಿಲುಕಿ ನಲಗುತ್ತಿರುವ ದಲಿತರು, ಹಿಂದುಳಿದ ವರ್ಗದವರು. ಮಹಿಳೆಯರು, ದಮನಿತರನ್ನು ಬಿಡುಗಡೆಗೊಳಿಸಲು ಇರುವ ಏಕೈಕ ಮಾರ್ಗ ಅಂಬೇಡ್ಕರ್ ವಾದದ ಕ್ರಿಯಾಚರಣೆ. ಆದರೆ ಅಂಬೇಡ್ಕರ್ ವಾದದ ಆಚರಣೆಯನ್ನು ಜನರು ತಮ್ಮ ದಿನನಿತ್ಯದ ಜೇವನದಲ್ಲಿ ಹೇಗೆ ಅನುಸರಿಸಬೇಕು ಎನ್ನುವುದಕ್ಕೆ ವಾರ್ಗಸೂಚಿಯಾಗಿದೆ ಈ ಪುಸ್ತಕ. ಅಂಬೇಡ್ಕರ್ ವಾದವು ತಾಂತ್ರಿಕವಾಗಿ ಪಠಣದ ಆಚರಣೆ ಮಾತ್ರವಾಗದೆ ಶೋಷಕರ ಅಂದರೆ ಬ್ರಾಮಣ್ಯ ಪ್ರಜ್ಞೆಯ ವಿರುದ್ಧ ಸತತವಾಗಿ
ದಿನಾಂಕ 06-05-1934 ರಲ್ಲಿ ಜನಿಸಿ ತಮ್ಮ 86ನೇ ವಯಸ್ಸಿನಲ್ಲಿ ಅಂದರೆ ದಿನಾಂಕ 03-08-2020 ರಂದು ಇಹಲೋಕ ತ್ಯಜಿಸಿದ ಶ್ರೀಯುತ ಮಹೇಶ್ವರಪ್ಪ ಅವರು ಸಾಹಿತ್ಯ,ಭಾಷೆ,ಧರ್ಮ ಮತ್ತು ರಾಜಕೀಯ ರಂಗಗಳ ನಡೆಯ ಬಗ್ಗೆ ಕ್ವಚಿತ್ತಾದ ಧೋರಣೆ ಹೊಂದಿದವರಾಗಿದ್ದರು.ಹಾಗೂ ಚಿತ್ರದುರ್ಗ ಜಿಲ್ಲೆಯ ಅನೇಕ ಯುವ ಪ್ರತಿಭೆಗಳ ಸಾಹಿತ್ಯ ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಬರೆದು ಪ್ರೋತ್ಸಾಹಿಸುತ್ತಿದ್ದರು. ಯಾವುದೇ ಮಾಧ್ಯಮಗಳಲ್ಲಾದರೂ ಸರಿ,ಅಲ್ಲಿ ಕಂಡುಬರುವ ಭಾಷಾ ದೋಷಗಳನ್ನು ತೋರಿಸಿಕೊಟ್ಟು ತಿದ್ದುವ ಕನ್ನಡದ ಮೇಷ್ಟ್ರು ಎಂದೇ ಖ್ಯಾತರಾಗಿದ್ದರು.ಶ್ರೀಯುತ ಮಹೇಶ್ವರಪ್ಪ ಸಾಹಿತಿ,ಬರಹಗಾರರಾಗಿ ಸರಳ ಸಜ್ಜನಿಕೆಯ ನಿಸ್ವಾರ್ಥ,ನಿಷ್ಟುರವಾದಿಯಾಗಿದ್ದರು.ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರಾಗಿ ನಿವೃತ್ತ ಜೀವನವನ್ನು ನಿರಂತರ ಅಧ್ಯಯನ, ಬರೆವಣಿಗೆಯೊಂದಿಗೆ ಅಪ್ಪಟ ಕನ್ನಡದ ಸಾಹಿತ್ಯಿಕ, ಸಾಮಾಜಿಕ ಸಾಮರಸ್ಯದ ಬದುಕು ನಡೆಸುತ್ತಿದ್ದರು.ರಾಷ್ಟ್ರಕವಿ ಡಾll ಜಿ.ಎಸ್.ಶಿವರುದ್ರಪ್ಪನವರ ಶಿಷ್ಯರಾಗಿದ್ದ
ಬೆಂಗಳೂರು: ‘ಭಾರತೀಯಪ್ರಜೆಗಳೆಲ್ಲರೂಕಾನೂನುಗಳಬಗ್ಗೆತಿಳಿದಿರಲೇಬೇಕು. ಮಹಿಳಾಕಾನೂನುಗಳಕುರಿತು ಈ ಕೃತಿಯುಸಮಗ್ರಮಾಹಿತಿನೀಡಿದೆ’ ಎಂದುಸ್ತ್ರೀವಾದಿಚಿಂತಕಿ, ವಕೀಲೆಹೇಮಲತಾಮಹಿಷಿ ಅವರು ತಿಳಿಸಿದರು. ಅಂಕಿತ ಪುಸ್ತಕ ಪ್ರಕಟಿಸಿರುವ ಹಿರಿಯಸಾಹಿತಿಸಿ.ಎನ್. ರಾಮಚಂದ್ರರಾವ್ ಅವರ ‘ಕಾನೂನುಮತ್ತುಮಹಿಳೆ’ ಕೃತಿಬಿಡುಗಡೆಕಾರ್ಯಕ್ರಮವುಇಂದುಬುಕ್ ಬ್ರಹ್ಮ ಫೇಸ್ಬುಕ್ ಲೈವ್ನಲ್ಲಿನಡೆಯಿತು. ಪುಸ್ತಕದಕುರಿತು ಮಾತನಾಡಿದ ಹಿರಿಯ ಪತ್ರಕರ್ತಪದ್ಮರಾಜದಂಡಾವತಿ ‘ಭಾರತದಸಂವಿಧಾನದಲ್ಲಿ ಎಲ್ಲರೂ ಸಮಾನರು. ಪುರುಷ ರೂಪಿಸಿದ ಕಾನೂನಿನಲ್ಲಿಯೂ ಮಹಿಳೆಯನ್ನು ಎರಡನೇ ದರ್ಜೆಪ್ರಜೆಯನ್ನಾಗಿನೋಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಕೃತಿ ಕುರಿತುಮಾತನಾಡಿದ ಅವರು ಮಹಿಳೆಯರಮೇಲೆ ದೌರ್ಜನ್ಯಪ್ರಕರಣಗಳು ಹೆಚ್ಚುತ್ತಿದ್ದು, ಅಪರಾಧಿಗಳಿಗೆ ಶಿಕ್ಷೆಆಗುತ್ತಿರುವ ಪ್ರಮಾಣ ತೀರಾ ಕಡಿಮೆ. ಕಾನೂನುಗಳು ಬಲಿಷ್ಠಗೊಳ್ಳಬೇಕು. ಕಾನೂನುಮತ್ತುಮಹಿಳೆ ಕೃತಿಯು ಎಲ್ಲರಿಗೂ ಮಹಿಳಾ ಕಾನೂನುಗಳ ಕುರಿತು ಅರಿವು ಮೂಡಿಸುವಂತಕೃತಿಯಾಗಿದೆ’ ಎಂದರು. ಹಿರಿಯ ಸಾಹಿತಿಸಿ. ಎನ್. ರಾಮಚಂದ್ರರಾವ್ ಅವರುಮಥುರಾ, ಬನ್ವಾರಿದೇವಿಪ್ರಕರಣಗಳನ್ನು ಉದಾಹರಣೆ ನೀಡಿ ಮಹಿಳಾಕಾನೂನುಗಳ ವೈಫಲ್ಯವನ್ನು ವಿವರಿಸಿದರು. ಲೇಖಕವಸುಧೇಂದ್ರಅವರುಹೇಮಲತಾಮಹಿಷಿ, ಸಿ.ಎನ್. ರಾಮಚಂದ್ರರಾವ್
ಕೆ.ಪಿ ಸುರೇಶ ಅವರ “ಕಂಡಷ್ಟು ಕಡೆದಷ್ಟು” ಎಂಬ ಕಾವ್ಯರೂಪಿ ಪ್ರಬಂಧಗಳ ಕೃತಿ ಪ್ರಕಟವಾಗಿದ್ದು ಈ ಕೃತಿಯಲ್ಲಿ ಅನಾಮಿಕ ಸಜೀವ ವ್ಯಕ್ತಿಗಳ ನೆನಪುಗತೆಗಳಿವೆ. 00ಪೂರ್ವಕ್ಕೆ ಮುಖ ಮಾಡಿ ಲೋಕಾಭಿರಾಮ ಮಾತನಾಡುತ್ತಾ ಕೂತ ಧೃತರಾಷ್ಟ್ರ, ಕುಂತಿ, ಗಾಂಧಾರಿಯರಿಗೆ ಕಾಡ್ಗಿಚ್ಚು ಆವರಿಸುತ್ತಿರುವುದು ಗೊತ್ತಾಗುತ್ತದೆ. ತಪ್ಪಿಸಿಕೊಂಡು ಓಡುವುದಿಲ್ಲ. ದುರಂತಕ್ಕೆ ಎದುರಾಗುತ್ತಾರೆ. ಕೊನೆಗೆ ಅನಾಥರಂತೆ ಸೀದು ಹೋಗುತ್ತಾರೆ. ಸಂಜಯ ಮಾತ್ರ ತಪ್ಪಿಸಿಕೊಳ್ಳುತ್ತಾನೆ. ವ್ಯಾಸರು ಇಂಥದೊಂದು ದೃಶ್ಯವನ್ನು ಮಹಾಭಾರತದಲ್ಲಿ ಚಿತ್ರಿಸಿದ್ದಾರೆ. ಆಲ್ಬರ್ಟ್ ಕಮೂನ ಔಟ್ ಸೈಡರ್ ನಲ್ಲಿ , ಕಾಫ್ಕಾನ ಮೆಟಮಾರ್ಫಸಿಸ್ ನಲ್ಲಿ , ಸಾಫೋಕ್ಲಿಸ್, ಯುರಿಪಿಡೀಸ್ ರ ನಾಟಕಗಳಲ್ಲಿ, ತುರ್ಗೆನೀವ್ ನ ತಂದೆಯರೂ ಮಕ್ಕಳಲ್ಲಿ…. Tragical realism ಎಂಬ ತತ್ವವೊಂದು ತೀವ್ರವಾಗಿ ಕೆಲಸ ಮಾಡಿದೆ. ಪಶ್ಚಿಮದಲ್ಲಿ
ಮುಡಿವ ಹೂಗಳು ಉಳಿದಿಲ್ಲ ಹುಡುಕಲೇನಿದೆ ಈಗ ಮಿಡಿವ ಹೃದಯಗಳೂ ಉಳಿದಿಲ್ಲ ಹುಡುಕಲೇನಿದೆ ಈಗ ಬರೀ ಮೈಲಿಗೆ ನಾಯಿಗಳದ್ದೇ ಸದ್ದು ಅಲ್ಲಲ್ಲಿ ಒಲಿದ ಜೀವಗಳು ಉಳಿದಿಲ್ಲ ಹುಡುಕಲೇನಿದೆ ಈಗ ಹೊರಟು ನಿಂತ ಪಥಿಕನಿಗೆ ಯಾವ ದಾರಿಯೂ ತೋಚುತ್ತಿಲ್ಲ ಹೆಜ್ಜೆಗುರುತುಗಳೂ ಉಳಿದಿಲ್ಲ ಹುಡುಕಲೇನಿದೆ ಈಗ ಕಾಗೆ ಗೂಬೆ ಕಪ್ಪೆಗಳ ವಟಗುಟ್ಟುವಿಕೆ ಅತಿಯಾಯಿತೀಗ ಪೊರೆವ ಕೈಗಳು ಉಳಿದಿಲ್ಲ ಹುಡುಕಲೇನಿದೆ ಈಗ ತಿರುವಿಗೆ ನೆಟ್ಟ ಕಲ್ಲುಗಳು ಏನನ್ನೂ ಹೇಳುತ್ತಿಲ್ಲ ‘ಮಹಾಂತ’ ಉಸಿರಾದ ಹೆಸರು ಉಳಿದಿಲ್ಲ ಹುಡುಕಲೇನಿದೆ ಈಗ ~ಮಹಾಂತೆಶ ಗೋನಾಲ, ಶಿಕ್ಷಕರು, ಪೋ:ದೇವರಗೋನಾಲ, ಯಾದಗಿರಿ ಮೊ:9686719573
“ಕನ್ನಡ ಗಜಲ್ ಕಾವ್ಯ “, ಎಂದು ಕೂಡಲೆ ನೆಪ್ಪು ಬರುವುದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆ.ಈ ಜಿಲ್ಲೆಯಲ್ಲಿ ಬಹಳಷ್ಟು ಬಿಸಿಲು ಬಿಸಿಲಿನಂತೆ ಕಡುಬಡತನ societyಯ ಅಸಮಾನತೆ economic problems( ಆರ್ಥಿಕ ಸಮಸ್ಯೆ) ಇವುಗಳ ಜೊತೆಗೆ ಅನಷ್ಕರತೆ ನಿರುದ್ಯೋಗದ ಹಸಿವು ಆಗೆ ಇದೆ.ಇವುಗಳೆಲ್ಲವನ್ನು ಹಿಟ್ಟುಕೊಂಡೆ ರಾಯಚೂರಿನ ಕವಿಗಳು ಸಾಹಿತಿಗಳು ಹಸಿ ನೋವುಗಳ ವಿಚಾರಗಳನ್ನು ಬರಹದ ಮುಖಾಂತರ ಓದುಗರ ಮುಂದೆ ಬಿತ್ತರಿಸುತ್ತಾರೆ.ಅಂತಹ ಹಸಿ ನೋವುಗಳು ತಮ್ಮ ಒಡಲಲ್ಲೆ ಇದ್ದರೂ ಹೋರಗೆ ಹಾಕುವಂತಹ ಗುಣ ಉಳ್ಳವರ ನಿಟ್ಟಿನಲ್ಲಿ ಕವಿ ಮಹಾದೇವ ಎಸ್ ಪಾಟೀಲ್ ರು, ಒಬ್ಬರು. ಮೂಲತಃ ಪಾಟೀಲರು, ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಭೂಪೂರು( ರಾಂಪೂರು) ಗ್ರಾಮದವರು ಓದಿದ್ದು ಬಿ
ಚಿತ್ರದುರ್ಗ: ಸಂವಿಧಾನ ಶಿಲ್ಪಿ, ದೇಶದಲ್ಲಿನ ಶೋಷಿತರು, ಮಹಿಳೆಯರು ಹಾಗೂ ಹಿಂದುಳಿದವರ ಬದುಕಿಗೆ ಧ್ವನಿಯಾಗಿ, ಎಲ್ಲರ ಬಾಳಿನ ಬೆಳಕಾಗಿ, ಪತ್ರಿಕೋದ್ಯಮವನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೊಯ್ದು ಚೇತನ ಚಿಲುಮೆಯಾದವರು ಡಾ. ಬಿ.ಆರ್ ಅಂಬೇಡ್ಕರ್. ನಾವಿಂದು ಅಂಬೇಡ್ಕರ್ ಅವರ 129 ನೇ ಜನ್ಮ ದಿನಾಚರಣೆ ಆಚರಿಸುವ ಸಡಗರದಲ್ಲಿದ್ದೇವೆ. ಭೀಮರಾವ್ ರಾಮ್ಜೀ ಅಂಬೇಡ್ಕರ್ ಅವರು ಸಾಮಾಜಿಕ, ಸಮಾನತೆ, ಅಸ್ಪøಶ್ಯತಾ ನಿವಾರಣೆಗಾಗಿ ಹೋರಾಡಿದ ಭಾರತೀಯ ಮಹಾನ್ ನಾಯಕರಲ್ಲಿ ಅಂಬೇಡ್ಕರ್ ಕೂಡ ಒಬ್ಬರು. ಡಾ. ಬಿ.ಆರ್ ಅಂಬೇಡ್ಕರ್ ಅವರು 1891 ಏಪ್ರಿಲ್ 14 ರಂದು ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ನಲ್ಲಿ ರಾಮಜೀ ಮತ್ತು ಭೀಮಬಾಯಿ ಅವರ ಮಗನಾಗಿ ಜನಿಸಿದರು. ಭೀಮರಾವ್ ಇವರ ಜನ್ಮನಾಮವಾಗಿದೆ. ಅರ್ಥಶಾಸ್ತ್ರ,
ಕಾವ್ಯ ಪರಂಪರೆಯೇ ಹಾಗೆಯೇ, ತನ್ನದೇ ಆದ ಲಯ, ನಿಯಮ, ಲಕ್ಷಣಗಳೊಂದಿಗೆ ಹೊರಬರುವ ಸಾಹಿತ್ಯ ಪ್ರಕಾರ ಸಾಹಿತ್ಯಾಸಕ್ತರ ಮನ ಸೆಳೆಯುತ್ತದೆ, ಅಂತಹ ಪ್ರಕಾರದ ಸಾಹಿತ್ಯ ಅಂದರೆ ಹಾಯ್ಕು ಸಾಹಿತ್ಯ, ಈ ಹೆಸರನ್ನು ಎರಡು ರೀತಿಯಲ್ಲಿ “ಹೈಕು=ಹಾಯ್ಕು” ಎಂದು ಬರೆಯುತ್ತಾರೆ, ಇದು ಮೂಲತಃ ಜಪಾನಿನ ಆಧ್ಯಾತ್ಮಿಕ ವಿಚಾರಗಳನ್ನು ವ್ಯಕ್ತಪಡಿಸಲು ಹುಟ್ಟಿದ ಲಯವೇ ಹೈಕು ಎಂದು ಹೈಕು ಬರೆಯುವುದರಲ್ಲಿ ತೊಡಗಿಕೊಂಡಿರುವ ಜಿಲ್ಲೆಯ ಹೆಸರಾಂತ ಸಾಹಿತಿಗಳು ತಿಳಿಸುವ ಮಾತು. ಕನ್ನಡ ಸಾಹಿತ್ಯದೊಳಗೆ ತ್ರಿಪದಿ, ಕಂದಪದ್ಯ,ಷಟ್ಪದಿ, ಗಜಲ್ ಈ ಎಲ್ಲಾ ಪ್ರಕಾರಗಳು ತಮ್ಮದೇ ಆದ ನಿಯಮ ಲಕ್ಷಣಗಳಲ್ಲಿ ಹೇಗೆ ರಚಿಸಿಕೊಂಡು ಹೋಗುತ್ತದೆಯೋ ಅದೇ ರೀತಿಯಲ್ಲಿ ಹಾಯ್ಕು ಸಹ ನಿಯಮಗಳು ಲಯ ಹೊಂದಿರುವುದನ್ನು ಕಾಣಬಹುದಾಗಿದೆ, ಹೈಕು ಪ್ರಕಾರದಲ್ಲಿ